Tuesday, 30 April 2013

ವಿವಿಧ ವಾರ್ಡಗಳಲ್ಲಿ ಇಕ್ಬಾಲ್ ಅನ್ಸಾರಿ ಮತಯಾಚನೆ



ಗಂಗಾವತಿ : ಗಂಗಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪರ ಹಿರಿಯ ನಾಯಕಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಹಾಗೂ ನಗರಸಭೆಯ ಸದಸ್ಯರು ವಿವಿಧ ವಾರ್ಡಗಳಲ್ಲಿ ಮತಯಾಚನೆ ಮಾಡಿದರು. ೧೪,೧೫,೧೯ ಮತ್ತು ೨೦ನೇ ವಾರ್ಡಿನಲ್ಲಿ ಮತಯಾಚನೆ ಮಾಡಿದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಮಾತನಾಡಿ ಅಭಿವೃದ್ದಿಗಾಗಿ ಅನ್ಸಾರಿಯವರಿಗೆ ಮತ ನೀಡಿ ಆಯ್ಕೆ ಮಾಡಿ, ಆಮೀಷಗಳಿಗೆ ಒಳಗಾಗದೆ  ಜಿಡ್ಡುಗಟ್ಟಿದ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸಲು ಇಕ್ಬಾಲ್ ಅನ್ಸಾರಿಯವರನ್ನು ಬಹುಮತದಿಂದ ಆಯ್ಕೆ ಮಾಡಿ ಎಂದು ವಿನಂತಿಸಿಕೊಂಡರು.
ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಮಾತನಾಡಿ ಗಂಗಾವತಿ ನಗರದಂತೆಯೇ ಇಡೀ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರ ಬಗ್ಗೆ ಮತದಾರರಿಗೆ ವಿವರಿಸಿದರು. ಅವುಗಳ ಜಾರಿಗಾಗಿ ತಮ್ಮನ್ನು ಆಯ್ಕೆ ಮಾಡಲು ವಿನಂತಿಸಿಕೊಂಡರು. ಕಣದಲ್ಲಿರುವ ಉಳಿದ ಅಭ್ಯರ್ಥಿಗಳು ನನ್ನ ವಿರುದ್ದ ಟೀಕೆ ಮಾಡಲು ಯಾವುದೇ ವಿಷಯಗಳು ಇಲ್ಲದಿರುವುದರಿಂದ ಜಾತೀಯತೆಯ ವಿಷಬೀಜ ಬಿತ್ತಲು ಹೊರಟಿದ್ದಾರೆ. ಸಮಾಜದ ಕೋಮಸಾಮರಸ್ಯ ಕದಡಲು ಯತ್ನಿಸುತ್ತಿದ್ದಾರೆ. ಅಂತವರನ್ನು ಧಿಕ್ಕರಿಸಿ ಸಮಾಜಮುಖಿ ಕಾರ್‍ಯದಲ್ಲಿ ತೊಡಗಿರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ವಿನಂತಿಸಿಕೊಂಡರು. ಮತದಾನ ಎಲ್ಲರ ಹಕ್ಕು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. 
ಇದೇ ಸಂದರ್ಭದಲ್ಲಿ ನಿವೃತ್ತ ಉಪತಹಶೀಲ್ದಾರರಾದ ವೀರಭದ್ರಪ್ಪ ಪತ್ತಾರ ಹಾಗೂ ಇತರರು ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್ ಜಿಲ್ಲಾಧ್ಯಕ್ಷ  ಎಸ್.ಬಿ.ಖಾದ್ರಿ, ತಾಲೂಕ ಅಧ್ಯಕ್ಷ ಯಮನಪ್ಪ ವಿಠಲಾಪೂರ, ನಗರಸಭೆ ಸದಸ್ಯರಾದ ಶ್ರೀಮತಿ ಸಂತೋಷಜಿ ,ಶಾಮೀದ ಮನಿಯಾರ್, ಶೇಕ ನಬಿ ಮುಖಂಡರಾದ ವೀರಣ್ಣ ಡಗ್ಗಿ,ಆರತಿ ತಿಪ್ಪಣ್ಣ ಹಾಗೂ ವಾರ್ಡಿನ ಹಿರಿಯರು,ಕಾರ್‍ಯಕರ್ತರು,ಅಭಿಮಾನಿಗಳು ಉಪಸ್ಥಿತರಿದ್ದರು. 

Sunday, 28 April 2013

ಅಭಿವೃದ್ದಿಗಾಗಿ ಅನ್ಸಾರಿಗೆ ಮತ ನೀಡಿ- ಲಲಿತಾರಾಣಿ ಶ್ರೀರಂಗದೇವರಾಯಲು



ಗಂಗಾವತಿ :  ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದರೂ ಗಂಗಾವತಿ ಇನ್ನೂ ಅಭಿವೃದ್ದಿ ಕಂಡಿಲ್ಲ. ಅಭಿವೃದ್ದಿಯ ತುಡಿತ ಇರುವ ಮತ್ತು ಕೆಲಸ ಮಾಡಿ ತೋರಿಸಿರುವ ಇಕ್ಬಾಲ್ ಅನ್ಸಾರಿಯವರಿಗೆ ಆಯ್ಕೆ ಮಾಡಿದರೆ ಗಂಗಾವತಿ ತಾಲೂಕಿನ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಜೆಡಿಎಸ್ ನ ಹಿರಿಯ ನಾಯಕಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಹೇಳಿದರು. 
ಅವರು ಜೆಡಿಎಸ್ ಪಕ್ಷ ಗಂಗಾವತಿಯ ವಿವಿಧ ವಾರ್ಡಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಕಾರ್‍ಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ೨೦೦೪ರಲ್ಲಿ ಆಯ್ಕೆಯಾಗಿ ಗಂಗಾವತಿಯ ನಗರದ ಸಮಗ್ರ ಅಭಿವೃದ್ದಿಗಾಗಿ ದುಡಿದ ಮತ್ತು ಹತ್ತಾರು ಯೋಜನೆಗಳನ್ನು ನಗರಕ್ಕೆ ತಂದು ಅಭಿವೃದ್ದಿಗಾಗಿ ಶ್ರಮಿಸಿದ ಇಕ್ಬಾಲ್ ಅನ್ಸಾರಿಯವರು ಈ ಸಲ ಆಯ್ಕೆಯಾದರೆ ಇನ್ನೂ ಹೆಚ್ಚಿನ ಕೆಲಸ ಮಾಡಬಲ್ಲರು. ಅವರನ್ನು ಆಯ್ಕೆ ಮಾಡುವ ಮೂಲಕ ಗಂಗಾವತಿಯ ಅಭಿವೃದ್ದಿಗೆ ಕೈಜೋಡಿಸೋಣ ಎಂದು ಮತದಾರರಿಗೆ ಕರೆನೀಡಿದರು.  ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು,ಓಣಿಯ ಮುಖಂಡರು ಉಪಸ್ಥಿತರಿದ್ದರು. 

Tuesday, 9 April 2013

ಗಂಗಾವತಿ ಕ್ಷೇತ್ರದ ವಿವಿದೆಡೆ ಪಾದಯಾತ್ರೆಯ ಮೂಲಕ ಅನ್ಸಾರಿ ಪ್ರಚಾರ

ಕೊಪ್ಪಳ :  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಪಾದಯಾತ್ರೆಯ ಮೂಲಕ ಪ್ರಚಾರದಲ್ಲಿ ತೊಡಗಿರುವ ಇಕ್ಬಾಲ್ ಅನ್ಸಾರಿಯವರು ದಾಸನಾಳ,ಹಿರೇಬೆಣಕಲ್ , ಚಿಕ್ಕಬೆಣಕಲ್, ಲಿಂಗದಳ್ಳಿ ಹಾಗೂ ಮುಕ್ಕುಂಪಿಯಲ್ಲಿ ಮನೆಮನೆಗೆ ತೆರಳಿ ಪ್ರಚಾರ ಕಾರ್‍ಯಕೈಗೊಂಡರು. ಕ್ಷೇತ್ರದ ಅಭಿವೃದ್ದಿಗೆ ಜೆಡಿಎಸ್ ಪಕ್ಷಕ್ಕೆ ಮತ ನೀಡಲು ಕೋರಿದರು.  ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಹಲವಾರು ಮುಖಂಡರು, ಬೇರೆ ಪಕ್ಷಗಳ ಕಾರ್‍ಯಕರ್ತರು ಜೆಡಿಎಸ್ ಪಕ್ಷ ಸೇರಿದರು.
    ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಯಮನಪ್ಪ ವಿಠಲಾಪೂರ,ನಗರಸಭೆ ಸದಸ್ಯ ರಮೇಶ, ಮುಖಂಡರಾದ ರಾಮಕೃಷ್ಣ,ಮುರ್ತುಜಾ ಸೇರಿದಂತೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು,ಕಾರ್‍ಯಕರ್ತರು ಭಾಗವಹಿಸಿದ್ದರು.

ಇಕ್ಬಾಲ್ ಅನ್ಸಾರಿಯವರಿಂದ ಮತಯಾಚನೆ

ಕೊಪ್ಪಳ : ಗಂಗಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್
ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ೭-೪-೨೦೧೩ರಂದು
ಕಾಮನೂರ,ಭೀಮನೂರ,ಸಂಗಾಪೂರ,ಲೇಬಗೇರಿ,ಯಲಮಗೇರಾ, ತಾಳಕನಕಾಪೂರ,ಬುಡಶೆಟ್ನಾಳ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಜೆಡಿಎಸ್ ಪರ ಪ್ರಚಾರ ಮಾಡಿದರು.
 ವಿವಿಧ ಮುಖಂಡರುಗಳ ಮನೆಗೆ ಭೇಟಿ ನೀಡಿದರು. ಶಾಸಕರಾಗಿ,ಸಚಿವರಾಗಿ ತಾವು ಮಾಡಿದ ಜನಪರ ಕೆಲಸಗಳ ಬಗ್ಗೆ ಮಾತನಾಡಿದ ಇಕ್ಬಾಲ್ ಅನ್ಸಾರಿಯವರು ಹಲವಾರು ದಶಕಗಳಿಂದ ಜನಸೇವೆಗೆ ತೊಡಗಿಸಿಕೊಂಡಿರುವ ತಮ್ಮ ಕುಟುಂಬ ಜನಸೇವೆಯೇ ಜನಾರ್ಧನ ಸೇವೆ ಎಂದು ಪರಿಗಣಿಸಿ ನಿರಂತರ ಸೇವೆಯಲ್ಲಿ ತೊಡಗಿದೆ. ನಿಸ್ವಾರ್ಥದಿಂದ
ಜನಸೇವೆಯಲ್ಲಿ ತೊಡಗಿರುವ ತಮಗೆ ಈ ಸಲದ ಚುನಾವಣೆಯಲ್ಲಿ  ಬಹುಮತದಿಂದ ಆಯ್ಕೆ ಮಾಡಿ ತಂದು ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್‍ಯ ಮಾಡಲು ಅನುವು ಮಾಡಿಕೊಡಬೇಕೆಂದು ಮತದಾರರಲ್ಲಿ ವಿನಂತಿಸಿಕೊಂಡರು.
  ಪಾದಯಾತ್ರೆಯ ಸಂದರ್ಭದಲ್ಲಿ ಹಾಲಿ ಗ್ರಾಮ ಪಂಚಾಯತ್ ಸದಸ್ಯರು,ಗ್ರಾಮದ ಹಲವಾರು ಜನಾಂಗದ ಮುಖಂಡರುಗಳು ಜೆಡಿಎಸ್ ಪಕ್ಷ ಸೇರಿದರು.

    ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಬಿ.ಖಾದ್ರಿ,ನಗರ ಘಟಕ ಯಮನಪ್ಪ ವಿಠಲಾಪೂರ ತಾಲೂಕ ಜೆಡಿಎಸ್ ಅಧ್ಯಕ್ಷರು,
 ಗ್ರಾಮೀಣ ಘಟಕದ ಅಧ್ಯಕ್ಷ ಮಲ್ಲೇಶಪ್ಪ ಗುಮಗೇರಿ,ತಾಲೂಕ ಕಾರ್‍ಯಾಧ್ಯಕ್ಷ ರಾಮಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರತಿ ತಿಪ್ಪಣ್ಣ, ಗಾಳೆಪ್ಪ ಗಂಟಿ ,ಬಸವರಾಜ
ಚಿಲವಾಡಗಿ,ವಿರೇಶ ತಾವರಗೇರಿ,ಬಸವಕುಮಾರ ಪಟ್ಟಣಶೆಟ್ಟಿ , ಫಕೀರಗೌಡ ಲೇಬಗೇರಿ ಸೇರಿದಂತೆ ಹಲವಾರು ನಾಯಕರು, ಗ್ರಾಮಗಳ ಮುಖಂಡರು,ಗ್ರಾಮ ಪಂಚಾಯತ್ ಸದಸ್ಯರು,ಹಿರಿಯರು,ಪಕ್ಷದ ಕಾರ್‍ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

Wednesday, 3 April 2013

ಜನತೆಯ ಅಚ್ಚುಮೆಚ್ಚಿನ ನಾಯಕ...ಜನಸಮುದಾಯದೊಂದಿಗೆ..










ಕ್ಷೇತ್ರದ ಮತದಾರರಲ್ಲಿ ವಿನಂತಿ....


ರಕ್ತಭಂಡಾರ ನಿರ್ಮಾಣ


ನಗರಸಭೆಯ ವಿವಿಧ ಕಾಮಗಾರಿಗಳು


ರಕ್ಷಣಾ ಇಲಾಖೆ ಮತ್ತು ಅರಣ್ಯ ಇಲಾಖೆಯ ಕಾಮಗಾರಿಗಳು


ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ


ಮುಖ್ಯಮಂತ್ರಿ ಪರಿಹಾರ ನಿಧಿ, ಜಲಾನಯನ ಇಲಾಖೆ ಮತ್ತು ವಕ್ಫ್ ಮಂಡಳಿ


ಮುನಿರಾಬಾದ್ ಮೆಹಬೂಬನಗರ ರೈಲ್ವೆ ಮಾರ್ಗ ಕಾಮಗಾರಿಗೆ ಚಾಲನೆ


ಉದ್ಯೋಗ ಮತ್ತು ತರಬೇತಿ ಇಲಾಖೆ, ಮೀನುಗಾರಿಕೆ ಕ್ಷೇತ್ರ


ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ


ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ವರ್ಗ ಅಭಿವೃದ್ದು ನಿಗಮ ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮ

ಮಹಿಳಾ ಮತ್ತು ಮಕ್ಕಳ  ಅಭಿವೃದ್ದಿ ಇಲಾಖೆ 

ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ


ಮಿನಿ ವಿಧಾನಸೌಧ


ತೋಟಗಾರಿಕೆ ಮತ್ತು ವಿದ್ಯುತ್ ಕಾಮಗಾರಿಗಳು


ಮಹಿಳಾ ಸಬಲೀಕರಣ


ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಗೆ ಸಾಕಷ್ಟು ಅನುದಾನ


ಸುಂದರವಾದ ಸರ್ಕಲ್ ಮತ್ತು ಗಟ್ಟಿಮುಟ್ಟಾದ ಸ್ವಚ್ಛವಾದ ರಸ್ತೆಗಳ ನಿರ್ಮಾಣ


ನೀರಾವರಿಗೆ ಆದ್ಯತೆ


ಹೈಟೆಕ್ ಬಸ್ ನಿಲ್ದಾಣ


ಪ್ರವಾಸಿ ಮಂದಿರ