Tuesday, 9 April 2013

ಗಂಗಾವತಿ ಕ್ಷೇತ್ರದ ವಿವಿದೆಡೆ ಪಾದಯಾತ್ರೆಯ ಮೂಲಕ ಅನ್ಸಾರಿ ಪ್ರಚಾರ

ಕೊಪ್ಪಳ :  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಪಾದಯಾತ್ರೆಯ ಮೂಲಕ ಪ್ರಚಾರದಲ್ಲಿ ತೊಡಗಿರುವ ಇಕ್ಬಾಲ್ ಅನ್ಸಾರಿಯವರು ದಾಸನಾಳ,ಹಿರೇಬೆಣಕಲ್ , ಚಿಕ್ಕಬೆಣಕಲ್, ಲಿಂಗದಳ್ಳಿ ಹಾಗೂ ಮುಕ್ಕುಂಪಿಯಲ್ಲಿ ಮನೆಮನೆಗೆ ತೆರಳಿ ಪ್ರಚಾರ ಕಾರ್‍ಯಕೈಗೊಂಡರು. ಕ್ಷೇತ್ರದ ಅಭಿವೃದ್ದಿಗೆ ಜೆಡಿಎಸ್ ಪಕ್ಷಕ್ಕೆ ಮತ ನೀಡಲು ಕೋರಿದರು.  ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಹಲವಾರು ಮುಖಂಡರು, ಬೇರೆ ಪಕ್ಷಗಳ ಕಾರ್‍ಯಕರ್ತರು ಜೆಡಿಎಸ್ ಪಕ್ಷ ಸೇರಿದರು.
    ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಯಮನಪ್ಪ ವಿಠಲಾಪೂರ,ನಗರಸಭೆ ಸದಸ್ಯ ರಮೇಶ, ಮುಖಂಡರಾದ ರಾಮಕೃಷ್ಣ,ಮುರ್ತುಜಾ ಸೇರಿದಂತೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು,ಕಾರ್‍ಯಕರ್ತರು ಭಾಗವಹಿಸಿದ್ದರು.

No comments:

Post a Comment